Showing posts with label bangalore. Show all posts
Showing posts with label bangalore. Show all posts

Friday, April 3, 2020

ದ್ರಾವಿಡ್‌ಗೆ ತಕ್ಕ ಮಗ ಸಮಿತ್‌

a small story about rahul dravid's son samit dravid


ಕ್ರಿಕೆಟಿಗರ ಮಕ್ಕಳು ಅಪ್ಪನ ಸರಿಸಮಾನವಾಗಿ ಬೆಳೆದ ಉದಾಹರಣೆಗಳು ಸಿಗುವುದು ಕಡಿಮೆ. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಅವರ ಮಗ ಅರ್ಜುನ್‌ ತೆಂಡುಲ್ಕರ್‌ ಮಾಸ್ಟರ್‌ ಬ್ಲಾಸ್ಟರ್‌ಗೆ ಸರಿಸಾಟಿಯಾಗಿ ಬೆಳೆಯುವ ಸೂಚನೆ ಕಾಣುತ್ತಿಲ್ಲ. ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌ ಅವರ ಮಗ ರೋಹನ್‌ ಗಾವಸ್ಕರ್‌ ಕೂಡ ಹಾಗೆಯೆ, ರೋಹನ್‌ಗೆ ಭಾರತ ಪರ ಆಡುವ ಅದೃಷ್ಟ ಸಿಕ್ಕಿದರೂ ಅವರೆಂದೂ ಅಪ್ಪನ ಸಾಧನೆಯ ಸಮೀಪಕ್ಕೂ ಬಂದಿಲ್ಲ.
ಖ್ಯಾತ ಕ್ರಿಕೆಟಿಗ ಕೆ.ಶ್ರೀಕಾಂತ್‌ ಪುತ್ರ ಅನಿರುದ್ಧ ಕತೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಒಟ್ಟಾರೆ ನೋಡುವುದಾದರೆ ದಿಗ್ಗಜ ಕ್ರಿಕೆಟಿಗರ ಮಕ್ಕಳು ಅವರವರ ತಂದೆಯ ಸಾಧನೆಯನ್ನು ಮೀರಿಸಿಲ್ಲ. ಹಾಗಂತ ಮುಂದೆ ಇಂತಹ ಸಾಧನೆ ಸಾಧ್ಯವಾಗದು ಎಂದಲ್ಲ. ಈಗಿನ ಪ್ರಕಾರವಾಗಿ ನೋಡುವುದಾದರೆ ಕರ್ನಾಟಕದ ಕ್ರಿಕೆಟ್‌ ದಿಗ್ಗಜ ರಾಹುಲ್‌ ದ್ರಾವಿಡ್‌ ಅವರ ಮಗ ಸಮಿತ್‌ ದ್ರಾವಿಡ್‌ ಭವಿಷ್ಯದಲ್ಲಿ ಅಪ್ಪನ ಸರಿಸಮಾನವಾಗಿ ಬೆಳೆದು ನಿಲ್ಲುವ ನಿರೀಕ್ಷೆ ಹುಟ್ಟಿಸಿದ್ದಾರೆ.
ಹೌದು, ಎಳೆವೆಯಿಂದಲೂ ಅಪ್ಪನನ್ನೇ ಸ್ಫೂರ್ತಿಯಾಗಿಸಿ ನಿರಂತರ ಅಭ್ಯಾಸ ನಡೆಸುತ್ತಿರುವ ಸಮಿತ್‌ ದ್ರಾವಿಡ್‌ ಶಾಲಾ ಕ್ರಿಕೆಟ್‌ ಕೂಟಗಳಲ್ಲಿ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಇದೀಗ ಕರ್ನಾಟಕ 14 ವಯೋಮಿತಿ ತಂಡವನ್ನು ಸಮಿತ್‌ ಸೇರಿಕೊಂಡಿದ್ದಾರೆ. ದಕ್ಷಿಣ ವಲಯ ಕೂಟದಲ್ಲಿ ಆಲೂರಿನಲ್ಲಿ ನಡೆಯುತ್ತಿರುವ ಗೋವಾ ವಿರುದ್ಧದ ಪಂದ್ಯದಲ್ಲಿ ಅಜೇಯ 109 ರನ್‌ ಬಾರಿಸಿದ್ದಾರೆ. 180 ಎಸೆತ ಎದುರಿಸಿದ ಅವರ ಇನಿಂಗ್ಸ್‌ನಲ್ಲಿ 15 ಬೌಂಡರಿ ಒಳಗೊಂಡಿತ್ತು.
ಇವರ ಬ್ಯಾಟಿಂಗ್‌ ಸಾಹಸದಿಂದಲೇ ಆತಿಥೇಯ ಕರ್ನಾಟಕ ಡ್ರಾ ಸಾಧಿಸಿಕೊಂಡಿತು ಎನ್ನುವುದು ವಿಶೇಷ. ಇದಕ್ಕೂ ಮೊದಲು ಸಮಿತ್‌ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯೋಜಿಸಿದ್ದ ಬಿಟಿಆರ್‌ ಅಂಡರ್‌ 14 ಕ್ರಿಕೆಟ್‌ ಕೂಟದಲ್ಲಿ ಭರ್ಜರಿ 150 ರನ್‌ ಬಾರಿಸಿದ್ದರು. ಮಾತ್ರವಲ್ಲ ಕೆಎಸ್‌ಸಿಎ 14 ವಯೊಮಿತಿಯೊಳಗಿನ ಅಂತರ ವಲಯ ಕ್ರಿಕೆಟ್‌ ಕೂಟದಲ್ಲಿ ಧಾರವಾಡ ವಿರುದ್ಧ ವೈಸ್‌ ಪ್ರಸಿಡೆಂಟ್‌ ತಂಡದ ಪರವಾಗಿ ಆಡಿ 22 ಬೌಂಡರಿ ಒಳಗೊಂಡ 201 ರನ್‌ ದ್ವಿಶತಕವನ್ನೂ ಬಾರಿಸಿದ್ದರು.
ಭವಿಷ್ಯದ ಭಾರತ ತಂಡದ ಪ್ರತಿಭೆ: ಸದ್ಯದ ಪರಿಸ್ಥಿತಿಯಲ್ಲಿ ಸಮಿತ್‌ ಬ್ಯಾಟಿಂಗ್‌ ಪರಿಯನ್ನು ನೋಡುತ್ತಿದ್ದರೆ ಮುಂದೆ ಇವರೊಬ್ಬರು ಸಮರ್ಥ ಕ್ರಿಕೆಟಿಗರಾಗಿ ರೂಪುಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಹಂತ ಹಂತವಾಗಿ ರಾಜ್ಯದ ವಿವಿಧ ತಂಡದೊಳಗೆ ಸ್ಥಾನ ಪಡೆದು ನಂತರ ರಣಜಿ ಆಡಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಮಿತ್‌ ಮುಂದೆ ಅವಕಾಶವಿದೆ.
ನಿರೀಕ್ಷೆ ಹುಸಿಗೊಳಿಸಿದ ದಿಗ್ಗಜರ ಮಕ್ಕಳು
ಅರ್ಜುನ್‌ ತೆಂಡುಲ್ಕರ್‌: 20 ವರ್ಷದ ಅರ್ಜುನ್‌ ತೆಂಡುಲ್ಕರ್‌ ತಂದೆಗೆ ತಕ್ಕ ಎನಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ ಆ ಹಾದಿಯಲ್ಲಿ ವೈಫ‌ಲ್ಯ ಅನುಭವಿಸಿದ್ದಾರೆ. ಸಚಿನ್‌ ದಾಖಲೆಗಳ ಸರದಾರನಾದರೂ ಅರ್ಜುನ್‌ ಫಾರ್ಮ್ಗಾಗಿ ಒದ್ದಾಟ ನಡೆಸುತ್ತಿದ್ದಾರೆ. ಮೆಲ್ಬರ್ನ್ ಕ್ರಿಕೆಟ್‌ ಕ್ಲನ್‌ ಯಂಗ್‌ ಕ್ರಿಕೆಟರ್, 14 ವಯೋಮಿತಿಯೊಳಗಿನ ಮುಂಬೈ ತಂಡ, 16 ವಯೊಮಿತಿಯೊಳಗಿನ ಮುಂಬೈ ತಂಡ, 19 ವಯೊಮಿತಿಯೊಳಗಿನ ಮುಂಬೈ ತಂಡದ ಪರವಾಗಿ ಆಲ್‌ರೌಂಡರ್‌ ಅರ್ಜುನ್‌ ಆಡಿದರೂ ವ್ಯಕ್ತಿಗತ ದಾಖಲೆಗಳ ಆಟವನ್ನು ಆಡಲು ಸಾಧ್ಯವಾಗಿಲ್ಲ.
ರೋಹನ್‌ ಗವಾಸ್ಕರ್‌: ಒಂದು ಕಾಲದಲ್ಲಿ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆ ಬರೆದಿರುವ ಸುನಿಲ್‌ ಗವಾಸ್ಕರ್‌ ಪುತ್ರನೇ ರೋಹನ್‌ ಗವಾಸ್ಕರ್‌. ರೋಹನ್‌ ಕ್ರಿಕೆಟ್‌ಗೆ ಆಗಮಿಸಿದ ಆರಂಭದ ದಿನಗಳಲ್ಲಿ ಒಂದಷ್ಟು ಸದ್ದು ಮಾಡಿದ್ದರು. ನಿರೀಕ್ಷೆಗಳನ್ನು ಹುಟ್ಟುಹಾಕಿದ್ದರು. ಭಾರತ ಏಕದಿನ ತಂಡದಲ್ಲಿ ಜಾಗ ಪಡೆದಿದ್ದ ಅವರು 11 ಪಂದ್ಯ ಆಡಿದ್ದಾರೆ. ಕೇವಲ 151 ರನ್‌ ಅಷ್ಟೇ ಮಾಡಿದ್ದಾರೆ. ಡಿಢೀರ್‌ ಫಾರ್ಮ್ ಕಳೆದುಕೊಂಡ ಅವರು ಮತ್ತೆ ತಂಡದಲ್ಲಿ ಸ್ಥಾನ ಪಡೆಯಲೇ ಇಲ್ಲ.
ಸ್ಟುವರ್ಟ್‌ ಬಿನ್ನಿ: ಕರ್ನಾಟಕದ ಖ್ಯಾತ ಕ್ರಿಕೆಟಿಗ ರೋಜರ್‌ ಬಿನ್ನಿ ಹೆಸರು ಗೊತ್ತಿಲ್ಲದವರಿಲ್ಲ. ಹಾಲಿ ರಾಜ್ಯ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷರೂ ಹೌದು, ಅವರ ಪುತ್ರ ಸ್ಟುವರ್ಟ್‌ ಬಿನ್ನಿ ರಣಜಿ, ಐಪಿಎಲ್‌ಗ‌ಳಲ್ಲಿ ಆಡಿದ್ದಾರೆ, ಮಾತ್ರವಲ್ಲ ಭಾರತದ ಪರ 6 ಟೆಸ್ಟ್‌, 14 ಏಕದಿನ ಪಂದ್ಯವನ್ನಾಡಿದ್ದಾರೆ. ಆದರೆ ಅವರ ಮೇಲೆ ಇಡಲಾಗಿದ್ದ ನಿರೀಕ್ಷೆಗಳೆಲ್ಲ ಹುಸಿಯಾಗಿದ್ದಾವೆ.
ಎಸ್‌. ಅನಿರುದ್ಧ: ಅನಿರುದ್ಧ್ ಅವರು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಪುತ್ರ, ಇವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡಿದ್ದು ಜೀವನದ ಗರಿಷ್ಠ ಸಾಧನೆ.
ಪ್ರತಿಫ‌ಲಾಪೇಕ್ಷೆಯಿಲ್ಲದೆ ಮಗನ ಆಟ ನೋಡುವೆ – ರಾಹುಲ್‌: ನನ್ನ ಮಗ ಫ‌ುಟ್‌ಬಾಲ್‌ ಸೇರಿದಂತೆ ಇತರೆ ಗೇಮ್ಸ್‌ಗಳಲ್ಲಿ ಭಾಗವಹಿಸಿರುವುದನ್ನು ನೋಡಿದ್ದೇನೆ. ಅವನ ಆಟವನ್ನು ಎಂಜಾಯ್‌ ಮಾಡಿದ್ದೇನೆ. ನನ್ನ ಮಗ ಕ್ರಿಕೆಟ್‌ ಆಡುವಾಗಲೂ ನಾನು ಯಾವುದೇ ಪ್ರತಿಫ‌ಲಾಪೇಕ್ಷೆಯಿಲ್ಲದೆ ನೋಡುತ್ತಿರುತ್ತೇನೆ. ಅವನು ಅವನ ಆಟವನ್ನು ಆಡುತ್ತಾನೆ. ಒಂದಂತೂ ಹೆಮ್ಮೆ ಅನಿಸುತ್ತದೆ. ನನ್ನ ಮಗ ಟೀವಿ ಹಾಗೂ ಐ ಪ್ಯಾಡ್‌ನಿಂದ ಸಾಕಷ್ಟು ದೂರವಿದ್ದಾನೆ. ಸಂಪೂರ್ಣ ಕ್ರೀಡೆಯಲ್ಲಿ ತೊಡಗಿಕೊಂಡಿರುವುದು ತೃಪ್ತಿದಾಯಕ ಎನಿಸುತ್ತಿದೆ ಎಂದು ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ.

Saturday, March 28, 2020

ಐಯ್ಯಂಗಾರ್‌ ತಟ್ಟೆ ಇಡ್ಲಿ

Story of famous iyengar thatte idli restaurant in bangalore
                                                             
                                                                   ಐಯ್ಯಂಗಾರ್‌ ತಟ್ಟೆ ಇಡ್ಲಿ
ಹೋಟೆಲ್‌ನ ಕಮರ್ಷಿಯಲ್‌ ರೂಲ್ಸ್‌ಗಳನ್ನೆಲ್ಲಾ ತೆಗೆದು ಹಾಕಿ, ಅಪ್ಪಟ ಮನೆಯ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವುದು, “ಐಯ್ಯಂಗಾರ್‌ ತಟ್ಟೆ ಇಡ್ಲಿ’ಯ ವಿಶೇಷತೆ…
ಮನೆಯಲ್ಲಿ ತಿಂಡಿ ಮಾಡೋಕ್ಕೆ ಯಾಕೋ ಬೇಸರ. ಹಾಗಂತ ಹೊರಗೆ ಹೋಟೆಲ್‌ನಲ್ಲಿ ಏನಾದ್ರೂ ತಿನ್ನೋಣ ಎಂದರೆ, ಸ್ವಲ್ಪ ತಿನ್ನುವಷ್ಟರಲ್ಲಿ ಹೊಟ್ಟೆ ತುಂಬಿದಂತಾಗಿ, ದಿನಾ ಪೂರ್ತಿ ಹುಳಿ ತೇಗು. ಆದರೆ, ನಿಮ್ಮ ರುಚಿ- ಶುಚಿ ಸಮಸ್ಯೆಗಳಿಗೆ ಪರಿಹಾರ, ಬಿಇಎಲ್‌ ಲೇಔಟ್, ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿರುವ ಐಯ್ಯಂಗಾರ್‌ ತಟ್ಟೆ ಇಡ್ಲಿ ಹೋಟೆಲ್‌! ಹೌದು! ಇಲ್ಲಿ ಅಡುಗೆಗೆ ಯಾವುದೇ ರೀತಿಯ ಐಯ್ಯಂಗಾರ್‌ ತಟ್ಟೆ ಇಡ್ಲಿಆರ್ಟಿಫಿಷಿಯಲ್‌ ಬಣ್ಣ, ಸೋಡಾ ಇಲ್ಲದೆ ಮಲ್ಲಿಗೆ ಹೂವಿನಂಥ ಮೃದುವಾದ ತಟ್ಟೆ ಇಡ್ಲಿ ಮಾಡ್ತಾರೆ.
“ನೀವು ಕಣ್ಮುಚ್ಚಿ ಎರಡು ಇಡ್ಲಿಯನ್ನು ಆರಾಮಾಗಿ ತಿನ್ನಬಹುದು’ ಎನ್ನುತ್ತಾರೆ ಹೋಟೆಲ್‌ ಮಾಲೀಕರು. ಕಳೆದ ಮೂವತ್ತು ವರ್ಷಗಳಿಂದ ಹೋಟೆಲ್‌ ಉದ್ಯಮದಲ್ಲಿಯೇ ಪಳಗಿರುವ ಇವರು, ಹೋಟೆಲ್‌ನ ಕಮರ್ಷಿಯಲ್‌ ರೂಲ್ಸ್‌ಗಳನ್ನೆಲ್ಲಾ ತೆಗೆದು ಹಾಕಿ, ಅಪ್ಪಟ ಮನೆಯ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರು ಮಾಡ್ತಾರೆ. ಪುಳಿಯೊಗರೆಗೆ ಗೊಜ್ಜು, ಸಾಂಬರ್‌ಗೆ ಬೇಕಾಗುವ ಪುಡಿ, ಎಲ್ಲವನ್ನೂ ಖುದ್ದು ತಾವೇ ತಯಾರಿಸುವುದು ಮತ್ತೂಂದು ವಿಶೇಷ. ಒಮ್ಮೆ ಕರಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸೋಲ್ಲವಂತೆ.
ಏನುಂಟು ಏನಿಲ್ಲ?‌: ಚಿಕ್ಕ ದರ್ಶಿನಿಗಳಲ್ಲಿ ಕುಡಿಯುವ ನೀರಿನದ್ದೇ ಸಮಸ್ಯೆ ಇರುತ್ತದೆ. ಆದರೆ, ಇಲ್ಲಿ ಫಿಲ್ಟರ್‌ ಕುಡಿಯುವ ನೀರಿನ ವ್ಯವಸ್ಥೆ ಇದೆ. ಪರಿಸರ ಸ್ನೇಹಿಯಾದ ಅಡಕೆ ಪಟ್ಟೆಯ ತಟ್ಟೆಗಳನ್ನು ಉಪಯೋಗಿಸುವುದು ನನಗಿಷ್ಟವಾದ ಮತ್ತೂಂದು ಅಂಶ. ತಟ್ಟೆ ಇಡ್ಲಿ ಜೊತೆ ಒತ್ತು ಶ್ಯಾವಿಗೆ ಬಾತ್‌, ನಿಂಬೆ ಹಣ್ಣಿನ ಚಿತ್ರಾನ್ನ, ಪುಳಿಯೊಗರೆ- ಬೆಳಗ್ಗಿನ ಮತ್ತೂಂದಿಷ್ಟು ಆಕರ್ಷಣೆಗಳು. ಮಧ್ಯಾಹ್ನ ಮುದ್ದೆ, ಚಪಾತಿ, ಪಲ್ಯ ಮತ್ತು ರೈಸ್‌. ಸಂಜೆ ಇಡ್ಲಿಯ ಜೊತೆ ಟೊಮೇಟೊ ರೈಸ್‌. ಇನ್ನು ನಿಮ್ಮ ನಾಲಿಗೆ ರುಚಿಗೆ ಬೋಂಡ, ಬನ್‌ ಬಿಸಿ ಬಿಸಿಯಾಗಿ ಕಾದು ಕೂತಿರುತ್ತವೆ. ಎಲ್ಲವೂ ನಿಮ್ಮ ಕೈಗೆಟುಕುವ ಬೆಲೆಯಲ್ಲಿ.
ಹಬ್ಬಕ್ಕೆ ಭರ್ಜರಿ ಅಡುಗೆ: ಇಲ್ಲಿಯ ಇನ್ನೊಂದು ವಿಶೇಷ, ಜನ್ಮಾಷ್ಟಮಿಯಂಥ ಹಬ್ಬಕ್ಕೆ ಅಷ್ಟಮಿ ತಿಂಡಿಗಳಾದ ಚಕ್ಕುಲಿ, ತೇಂಗೊಳ್‌, ಕೋಡುಬಳೆ, ನಿಪ್ಪಟ್ಟು ಇನ್ನಿತರೆ ತಿಂಡಿಗಳನ್ನು ಇವರು ಮಾಡಿ ಕೊಡುತ್ತಾರೆ.
ಎಲ್ಲಿದೆ?: 1207/2, ವಿದ್ಯಾರಣ್ಯಪುರ ಮುಖ್ಯರಸ್ತೆ, ಬಿಇಎಲ್‌ ಲೇಔಟ್‌ 2ನೇ ಬ್ಲಾಕ್‌
* ಗಾಯತ್ರಿ ರಾಜ್‌